Thursday, May 28, 2009

ಯಾಕೆ ಹೀಗಾಯಿತು?

ಯಾಕಾಯಿತು ನಿನಗೀತರ ಯಾಕಾಯಿತು?
ಏನಾಯಿತು ನಿನಗೀದಿನ ಏನಾಯಿತು?
ಹುಟ್ಟಿದೊಡನೆ ಕನ್ನಡ ನಿನ್ನ ಮಾತೃಭಾಷೆ ಆಯಿತು
ಆದರೇಕೆ ನಿನಗಿಂದು ಇದು ಬೇಡವಾಯಿತು?

ಹುಟ್ಟಿದ್ದು ಬೆಳದಿದ್ದು ಹುಬ್ಬಳ್ಳಿ ಮೈಸೂರು
ಜೀವಿಸಲು ಬೇಕಿಂದು ಅಮೇರಿಕ ಸಿಂಗಪೂರು
ಶಾಲೆಯಲ್ಲಿ ಕಲಿತೆ ನೀನು ಅ ಆ ಇ ಈ
ಕನ್ನಡವೆಂದರೆ ಏಕೆ ನಿನಗೆ ಥು ಥೂ ಛಿ ಛೀ ?

ರೊಟ್ಟಿ ಮುದ್ದೆ ಉಂಡು ಅಂದು ಬುದ್ದಿ ಚುರುಕಾಯಿತಣ್ಣ
ಪಿಜ್ಜಾ ಬರ್ಗರ್ ತಿಂದು ಇಂದು ದೇಹ ದಪ್ಪಗಾಯಿತಣ್ಣ
ಅಂದು ನೀನು ಅತ್ತು ಕರೆದೆ, ತೋರಿಸಪ್ಪ ಜೋಗ
ಏಕೋ ತಮ್ಮ ಇಂದು ಮರೆತೆ ಕನ್ನಡದ ಸೊಬಗ?

ಸಿರಿತನವ ತೋರು ನೀನು ಕನ್ನಡ ಧ್ವಜ ಹಾರಿಸಿ
ಹಿರಿತನವ ಬೀರು ನೀನು ತಾಯಿ ಭುವನೇಶ್ವರಿಗೆ ನಮಸ್ಕರಿಸಿ
ಕನ್ನಡಗಿರ ಒಟ್ಟಾಗಿಸು ಕೈಗೆ ಕೈ ಸೇರಿಸಿ
ಜೈ ಕರ್ನಾಟಕ ಮಾತೆ ಅನ್ನು ಕಾವೇರಿ ತೀರ್ಥ ಸೇವಿಸಿ

ವಿಷ
(ವಿ. ಶಂಕರ್)

No comments:

Post a Comment